ದ್ವಿತೀಯ ಹಂತ ಮುಗಿಸಿದ `ಮೂಕಹಕ್ಕಿ`
Posted date: 13 Thu, Oct 2016 – 10:07:49 AM

ಹೀರಾಲಾಲ್ ಮೂವೀಸ್ ಲಾಂಛನದಡಿಯಲ್ಲಿ ಶ್ರೀಮತಿ ಚಂದ್ರಕಲಾ ಟಿ. ರಾಥೋಡ್ ನಿರ್ಮಿಸುತ್ತಿರುವ ಮೂಕಹಕ್ಕಿ ಚಿತ್ರಕ್ಕೆ ಯಾವುದೇ ಸದ್ದುಗದ್ದಲವಿಲ್ಲದೆ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ.
ಚಿತ್ರಕ್ಕಾಗಿ ನಾಯಕ ನಟ ಸತೀಶ್, ಪೂಜಾ, ಸಂಪತ್ ಮುಂತಾದವರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಹಾಗೂ ಎರಡು ಗೀತೆಗಳನ್ನು ಕನಕಪುರ ಹಾಗೂ ಕೋಲಾರದ ಸುತ್ತಮುತ್ತ ಚಿದಾನಂದ್ ಛಾಯಾಗ್ರಹಣದಲ್ಲಿ ನೀನಾಸಂ ಮಂಜು ಚಿತ್ರಿಸಿಕೊಂಡರು.  
ಚಿತ್ರದ ಅಂತಿಮ ಹಂತದ ಚಿತ್ರೀಕರಣವು ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ಕೋಟಿಗಾನಹಳ್ಳಿ ರಾಮಯ್ಯ, ಸತೀಶ್‌ಕುಮಾರ್, ಕಥೆ, ಸಂಭಾಷಣೆ, ಸಾಹಿತ್ಯ, ಚಿದಾನಂದ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ, ಮಾಸ್ ಮಾದ ಸಾಹಸ, ಶ್ರೀಧರ್‌ಮೂರ್ತಿ ಕಲೆ, ಸ್ಟಾರ್‌ಗಿರಿ ನೃತ್ಯ, ಸುಜೀತ್ ನಾಯಕ್ ಸಂಕಲನವಿದ್ದು, ನೀನಾಸಂ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ತಾರಾಗಣದಲ್ಲಿ ಸತೀಶ್‌ಕುಮಾರ್, ಪೂಜಾ (ತಿಥಿಖ್ಯಾತಿ) ಸುನಿಲ್‌ಕುಮಾರ್ ಸಂಪತ್‌ಕುಮಾರ್, ಅನಿಲ್‌ಕುಮಾರ್, ನಿಶಾಂತ್, ಚೆನ್ನ ಬಸಪ್ಪ ಕಾಳೆ, ಶ್ರೀಧರ್‌ಮೂರ್ತಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed